- ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ದೇವರಿಲ್ಲ
- ವೇದ ಸುಳ್ಳಾದರೂ ಗಾದೆ ಸುಳ್ಳಾಗದು
- ಹಲ್ಲಿದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲಿಲ್ಲ
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
- ಕೈ ಕೆಸರಾದರೆ ಬಾಯಿ ಮೊಸರು
- ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
- ಮಾತು ಬೆಳ್ಳಿ ಮೌನ ಬಂಗಾರ
- ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ?
- ಮಾತು ಮನೆ ಮುರಿತು ತೂತು ಓಲೆ ಕೆಡಿಸಿತು
- ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ
- ತಾಯಿಯಂತೆ ಮಗಳು ನೂಲಿನಂತೆ ಸೀರೆ
- ಹಾಸಿಗೆ ಇದ್ದಷ್ಟು ಕಾಲು ಚಾಚು
- ಸಾಲ ಮಡಿಯಾದ್ರು ತುಪ್ಪ ತಿನ್ನು
- ಅಂತ್ಯ ನಿಷ್ಠುರಕ್ಕಿಂತ, ಆದಿ ನಿಷ್ಠುರ ಮೇಲು
- ಮಾಡಿದ್ದುಣ್ಣೋ ಮಾರಾಯ
- ಹಿತ್ತಲ ಗಿಡ ಮದ್ದಲ್ಲ
- ತಾಳಿದವನು ಬಾಳಿಯಾನು
- ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದನಂತೆ
- ಪಾಪಿ ಸಮುದ್ರ ಹೊಕ್ಕರು ಮೊಣಕಾಲು ಉದ್ದ ನೀರು
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?
- ದಾನ ಕೊಟ್ಟಿದ್ ಮರಿಬೇಕು ಸಾಲ ಕೊಟ್ಟಿದ್ ಬರೀಬೇಕು
- ತಲೇ ಮೇಲಣ ಬರಹ ಎಲೆಯಿಂದ ಒರೆಸಿದರೆ ಹೋದೀತೇ
- ಇದ್ದಾಗ ನವಾಬ ಸಾಬ, ಇಲ್ಲದಾಗ ಫಕೀರ ಸಾಬ
- ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ
- ಮನೆಗೆ ಮಾರಿ ಪರರಿಗುಪಕಾರಿ
- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
- ದೀಪದ ಕೆಳಗೆ ಯಾವತ್ತೂ ಕತ್ತಲೇ
- ಬೆಳೆಯುವ ಸಿರಿ ಮೊಳಕೆಯಲ್ಲಿ
- ಊರು ಹೋಗು ಅನ್ನುತ್ತೆ ಕಾಡು ಬಾ ಅನ್ನುತ್ತೆ
- ಹಂಗಿನರಮನೆಗಿಂತ ಕುಂದಣದ ಗುಡಿಸಲು ಲೇಸು
- ಪಾಲಿಗೆ ಬಂದದ್ದು ಪಂಚಾಮೃತ
- ದೇವರು ವರ ಕೊಟ್ಟರೂ ಪೂಜಾರಿ ಕೊಡ
- ಎಲ್ಲರ ಮನೆ ದೋಸೆನೂ ತೂತೆ
- ಗಂಡ-ಹೆಂಡಿರ ಜಗಳ ತಿಂದು ಮಲುಗೊ ವರೆಗೆ
- ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ
- ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
- ಅತ್ತೆಗೊಂದು ಕಾಲ ಸೊಸೆಗೊಂದು ಕಾಲ
- ಬೇಲೀನೇ ಎದ್ದು ಹೊಲ ಮೇಯ್ದಂತೆ
- ಉಂಡು ಹೋದ ಕೊಂಡು ಹೋದ
- ಚಿಂತೆ ಇಲ್ಲದವನಿಗೆ ಸಂತೇಲು ನಿದ್ದೆ
- ಎತ್ತು ಏರಿಗೆಳೀತು ಕೋಣ ನೀರಿಗೆಳೀತು
- ಗಣೇಶನ ಮಾಡಲು ಹೋಗಿ ಅವರಪ್ಪನ ಮಾಡಿದಂತೆ
- ಗೆದ್ದೆತ್ತಿನ ಬಾಲ ಹಿಡಿದ ಹಾಗೆ
- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ
- ಹೋದ್ಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ
- ಹಾಡಿದ್ದೇ ಹಾಡೋ ಕಿಸಬಾಯಿ ದಾಸ
- ಹೆತ್ತೋರಿಗೆ ಹೆಗ್ಗಣ ಮುದ್ದು
- ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
- ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕೆ?
- ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು
- ಕಾರ್ಯವಾಸಿ ಕತ್ತೆ ಕಾಲು ಹಿಡಿ
- ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರುಷ ಆಯಸ್ಸು
- ಬಡವರ ಮನೆ ಊಟ ಚೆನ್ನ ದೊಡ್ಡವರ ಮನೆ ನೋಟ ಚೆನ್ನ
- ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ
- ಅಳಿಯ ಅಲ್ಲ ಮಗಳ ಗಂಡ
- ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ
- ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ
- ಹಾವು ಸಾಯಬಾರದು ಕೋಲೂ ಮುರೀಬಾರ್ದು
- ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು
- ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ
- ಅತಿಯಾದರೆ ಅಮೃತವೂ ವಿಷ
- ಹುಟ್ಟು ಗುಣ ಸುಟ್ಟರೂ ಹೋಗೋಲ್ಲ
- ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು
- ಅತಿ ಆಸೆ ಗತಿ ಕೇಡು
- ಬೆಳ್ಳಗಿರೋದೆಲ್ಲ ಹಾಲಲ್ಲ
- ಎರಡು ಕೈ ಸೇರಿದ್ರೇನೆ ಚಪ್ಪಾಳೆ
- ಶಿವ ಪೂಜೇಲಿ ಕರಡಿಗೆ ಬಿಟ್ಟಂತೆ
- ಆರು ಕಾಸು ಕೊಟ್ಟರೆ ಅತ್ತೆ ಕಡೆ ಮೂರು ಕಾಸು ಕೊಟ್ಟರೆ ಸೊಸೆ ಕಡೆ
- ಸಂಕಟ ಬಂದಾಗ ವೆಂಕಟರಮಣ
- ಕೋತಿ ತಾನು ಕೆಡೋದಲ್ದೆ ವನಾನೆಲ್ಲ ಕೆಡಿಸಿತು
- ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ
- ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ
- ಶಂಖದಿಂದ ಬಂದರೇನೇ ತೀರ್ಥ
- ಮನಸಿದ್ದರೆ ಮಾರ್ಗ
- ತುಂಬಿದ ಕೊಡ ತುಳುಕಲ್ಲ
- ಕುಣಿಯಲು ಬಾರದ ನರ್ತಕಿ ನೆಲ ಡೊಂಕು ಅಂದಳಂತೆ
- ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದ
- ಇರುಳು ಕಂಡ ಬಾವಿಗೆ ಹಗಲು ಬೀಳ ಬಾರದು
- ಮಾಡಿದುಣ್ಣೋ ಮಹರಾಯ
- ಹೊಸದರಲ್ಲಿ ಅಗಸ ಗೋಣಿ ಎತ್ತಿ ಎತ್ತಿ ಒಗೆದ
- ಯಥಾ ರಾಜ ತಥಾ ಪ್ರಜಾ
- ತಾನು ಮಾಡಿದ್ದು ಉತ್ತಮ ಮಗ ಮಾಡಿದ್ದು ಮಧ್ಯಮ ಆಳು ಮಾಡಿದ್ದು ಹಾಳು
- ವಿನಾಶ ಕಾಲಕ್ಕೆ ವಿಪರೀತ ಬುದ್ಧಿ
- ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
- ಮನೆ ಮನೇಲಿ ಮುದ್ದೆ ಮಾರಿ ಗುಡೀಲಿ ನಿದ್ದೆ
- ಕೋತಿ ತಿಂದು ಮೇಕೆ ಬಾಯಿಗೆ ಒರೆಸಿತು
- ತಾ ಕಳ್ಳ ಪರರ ನಂಬ
- ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ
- ಕತ್ತೆ ಎಂದಾದರೂ ಒದ್ದರೆ ಮರಳಿ ನೀನೊದೆಯದಿರದಕೆ
- ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ವೇ
- ಊಟಕ್ಕಿಲ್ಲದ ಉಪ್ಪಿನಕಾಯಿ
- ಊರಿಗೆ ಬಂದವರು ನೀರಿಗೆ ಬರೊಲ್ವೇ
- ಅಲ್ಪರ ಸಂಗ ಅಭಿಮಾನ ಭಂಗ
- ಒಗ್ಗಟ್ಟನಲ್ಲಿ ಬಲವಿದೆ
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
- ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು
- ಕೆಟ್ಟು ಪಟ್ಟಣ ಸೇರು
- ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ
- ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ?
- ಮನೇಲಿ ಇಲಿ, ಬೀದೀಲಿ ಹುಲಿ
- ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ
- ಗಾಳಿಗೆ ಗುದ್ದಿ ಮೈ ನೋವಿಸಿಕೊ೦ದ ಹಾಗೆ
- ಗಾಯದ ಮೇಲೆ ಬರೆ ಎಳೆದ ಹಾಗೆ
- ತಾನೂ ತಿನ್ನ, ಪರರಿಗೂ ಕೊಡ
- ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ
- ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ
- ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ
- ದುಷ್ಟರ ಕ೦ಡರೆ ದೂರ ಇರು.
- ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು
- ಜನ ಮರುಳೋ ಜಾತ್ರೆ ಮರುಳೋ
- ನಾಯಿ ಬಾಲ ಡೊ೦ಕು
- ಅರವತ್ತಕ್ಕೆ ಅರಳು ಮರಳು
- ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ
- ಐದು ಬೆರಳು ಒ೦ದೇ ಸಮ ಇದುವುದಿಲ್ಲ
- ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ
- ಆರಕ್ಕೆ ಏರಲ್ಲಿಲ್ಲ ಮೂರಕ್ಕೆ ಇಳೀಲ್ಲಿಲ್ಲ
- ಕಾಸಿದ್ದರೆ ಕೈಲಾಸ
- ಆಕಳು ಕಪ್ಪಾದರೆ ಹಾಲು ಕಪ್ಪೆ
- ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ
- ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು
- ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ
- ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ
- ಸ೦ಕಟ ಬ೦ದಾಗ ವೆ೦ಕಟರಮಣ
- ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು
- ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸ೦ಬ೦ಧ ಅ೦ದ ಹಾಗೆ
- ಕಳ್ಳನ ಮನಸ್ಸು ಹುಳ್ಹುಳ್ಗೆ
- ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ
- ಬಡವನ ಕೋಪ ದವಡೆಗೆ ಮೂಲ
- ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಮುಚ್ಚಿದರಂತೆ
- ಹೊರಗೆ ಥಳಕು ಒಳಗೆ ಹುಳಕು
- ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ
- ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು
- ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ
- ಕುರಿ ಕಾಯೋದಕ್ಕೆ ತೋಳವನ್ನು ಕಳಿಸಿದರ೦ತೆ
- ಸ೦ಸಾರ ಗುಟ್ಟು, ವ್ಯಾಧಿ ರಟ್ಟು
- ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ
- ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು
- ಕ೦ತೆಗೆ ತಕ್ಕ ಬೊ೦ತೆ
- ದುಡ್ಡೇ ದೊಡ್ಡಪ್ಪ
- ಗಾಳಿ ಬ೦ದಾಗ ತೂರಿಕೋ
- ಗೋರ್ಕಲ್ಲ ಮೇಲೆ ನೀರು ಸುರಿದ೦ತೆ
- ಮಾಡಿದವರ ಪಾಪ ಆಡಿದವರ ಬಾಯಲ್ಲಿ
- ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ
- ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು
- ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ?
- ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ
- ಅವನು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು
- ಕಾಸಿಗೆ ತಕ್ಕ ಕಜ್ಜಾಯ
- ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ
- ಆಚಾರ ಹೇಳೋಕೆ ಬದನೆಕಾಯಿ ತಿನ್ನೋಕೆ
- ಚೋರ ಗುರುವಿಗೆ ಚಂಡಾಲ ಶಿಷ್ಯರು
- ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಹಾಗೆ
- ಆಪತ್ತಿಗಾದವನೇ ನೆಂಟ
- ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು
- ದೂರದ ಬೆಟ್ಟ ನುಣ್ಣಗೆ
- ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ
- ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ
- ಕೂಸು ಹುಟ್ಟೋ ಮುಂಚೆ ಕುಲಾವಿ ಹೊಲೆದರಂತೆ
- ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕೆ ಅಲೆದರಂತೆ
- ಕಬ್ಬಿಣ ಕಾದಾಗಲೇ ಬಡಿಯಬೇಕು
- ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು
- ಕೊಟ್ಟೋನು ಕೋಡಂಗಿ ಇಸ್ಕೊಂಡೋನು ಈರಭದ್ರ
- ಸಜ್ಜನರ ಸಂಗ ಹೆಜ್ಜೇನು ಸವಿದಂತೆ
- ದೇಶ ಸೇವೆಯೇ ಈಶ ಸೇವೆ
- ಶಕ್ತಿಗಿಂತ ಯುಕ್ತಿ ಮೇಲು
- ಆಳಾಗಿ ದುಡಿ ಅರಸಾಗಿ ಉಣ್ಣು
- ಹುಲಿ ಮುದಿಯಾದರೆ ಹುಲ್ಲು ತಿನ್ನುವುದೆ?
- ಅರಸನ ಮುಂದಿರಬೇಡ ಕತ್ತೆಯ ಹಿಂದಿರಬೇಡ
- ನಾರಿ ಮುನಿದರೆ ಮಾರಿ
- ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ
- ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
Featured Image Courtesy – Google.com
Categories: Treasure Trove
Very good
LikeLike
ಉತ್ತಮ ಸಂಗ್ರಹ. ಸಾಧ್ಯವಾದರೆ ಇನ್ನೂ ಸಂಗ್ರಹವಾದಂತೆ ಸೇರಿಸುತ್ತಾ ಇರಿ.
LikeLike
ಧನ್ಯವಾದಗಳು. ಸಮಯ ಸಿಕ್ಕಾಗ update ಮಾಡ್ತಿನಿ.
LikeLiked by 1 person